ಕನ್ನಡದಲ್ಲಿ ಮತ್ತೊಂದು ಸಂಗೀತಮಯ ಚಿತ್ರ ಪ್ರೇಮಕಥೆಯೊಂದಿಗೆ ಬಂಗಾರು ಅವರ ಚೊಚ್ಚಲ ನಿರ್ದೇಶನದಲ್ಲಿ ತಯಾರಾಗಿದ್ದು ಇದೀಗ ಮೊದಲ ಪ್ರತಿಯನ್ನು ಹೊರತಂದಿರುವ ಖುಷಿಯಲ್ಲಿದ್ದಾರೆ ನಿರ್ಮಾಪಕರಾದ ನಾಗಭೂಷಣ್.
ಸುಮಧುರ ಸಂಗೀತ ಗಂಧರ್ವ ಅವರ ನೇತೃತ್ವದಲ್ಲಿ ತಯಾರಾಗಿದ್ದು ಕಾಲ್ಗೆಜ್ಜೆ, ಚಿತ್ರದ ಧ್ವನಿಸುರುಳಿಗೆ ಮಾರುಕಟ್ಟಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಚಿತ್ರದ ಮೊದಲ ಪ್ರತಿಯೊಂದಿಗೆ ಖುಷಿ ವ್ಯಕ್ತಪಡಿಸಿರುವ ನಿರ್ಮಾಪಕ ನಾಗಭೂಷಣ್ ನಿರ್ದೇಶಕ ಎ. ಬಂಗಾರು ಅವರ ಕೆಲಸವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ.
ಕಾಲ್ಗೆಜ್ಜೆ, ಚಿತ್ರದಲ್ಲಿ ಅತಿಥಿ ನಟರಾಗಿ ಟಿ.ಎಸ್. ನಾಗಾಭರಣ, ಎ. ಮಹೇಂದರ್ ಹಾಗೂ ವಿ. ಮನೋಹರ್ ಅಭಿನಯಿಸಿರುವುದು ವಿಶೇಷ.
ನನ್ನ ಕಿರಯ ವಯಸ್ಸಿನಲ್ಲಿ ನನಗೆ ಸಂಪೂರ್ಣ ಇಷ್ಟವಾದ ನೃತ್ಯದ ಹಿನ್ನಲೆ ಇರುವ ಪಾತ್ರ ದೊರಕಿರುವುದು ಸೌಭಾಗ್ಯ ಎನ್ನುತ್ತಾರೆ ನಾಯಕಿ ರೂಪಿಕಾ. ಬೆಳಗಿನ ಜಾವ ಎದ್ದು ಚಿತ್ರೀಕರಣಕ್ಕೆ ಸಿದ್ಧವಾಗುತ್ತಿದ್ದ ವಿಚಾರ ಬಿಟ್ಟರೆ ಇಡೀ ಚಿತ್ರಕ್ಕೆ ಸಂತೋಷದಿಂದ ಪಾಲ್ಗೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ ನಾಯಕ ವಿಶ್ವಾಸ್.
ವೀನಸ್ ಮೂರ್ತಿ ಛಾಯಾಗ್ರಹಣವಿರುವ ಈ ಚಿತ್ರವನ್ನು ಮೇಲುಕೋಟೆ, ಭದ್ರಾವತಿ, ಬೆಂಗಳೂರು, ಕುಂದಾಪುರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ವಿಶ್ವಾಸ್, ರೂಪಿಕಾ, ರಂಗಾಯಣ ರಘು, ಪವಿತ್ರಾ ಲೋಕೇಶ್, ಶರಣ್, ಶ್ರೀಧರ್ ಸುಮಿತ್ರಾ, ತಬಲಾ ನಾಣಿ ಇನ್ನಿತರರು ತಾರಾಗಣದಲ್ಲಿದ್ದಾರೆ.
ಕಾಲ್ಗೆಜ್ಜೆ, ಮಿಡಿವ ಹೃದಯಗಳ ನಾದ ಬ್ರೈಟ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಎಂ. ನಾಗಭೂಷಣ್ ನಿರ್ಮಿಸಿದ ಚಿತ್ರಕ್ಕೆ ಬೈರೆಗೌಡ ಎಂ. ಕಾರ್ಯಕಾರಿ ನಿರ್ಮಾಪಕರು